ಡೆಸ್ಕ್ : ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ 11 ಸಾವಿರ ವೋಲ್ಟ್ ಸಾಮರ್ಥ್ಯದ ಹೈವೋಲ್ಟೇಜ್ ವಿದ್ಯುತ್ ತಂತಿ ಮೇಲೆ ಮಲಗಿ ಗ್ರಾಮಸ್ಥರು ಕ್ಷಣಕ್ಷಣಕ್ಕೂ ಆತಂಕದಲ್ಲಿ ಕಾಲಕಳೆಯುವಂತೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಬೆಚ್ಚಿಬೀಳಿಸುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲಿ ಹೀಗೆ ಬೆಚ್ಚಿಬೀಳಿಸುವ ಘಟನೆೊಂದು ನಡೆದಿದ್ದು, ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಜೀವದ ಹಂಗನ್ನೇ ಮರೆತು ಅಪಾಯಕಾರಿ ಸಾಹಸಕ್ಕೆ ಮುಂದಾದ ಘಟನೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕುಡಿದ ಮತ್ತಿನಲ್ಲಿ ಆತ ಬರೋಬ್ಬರಿ 11 ಸಾವಿರ ವೋಲ್ಟ್ ವಿದ್ಯುತ್ ತಂತಿಗಳ ಮೇಲೆಯೇ ಮಲಗಿ ಎಲ್ಲರನ್ನೂ ಆತಂಕಕ್ಕೀಡು ಮಾಡಿದ್ದಾನೆ. ಮಂಗಳವಾರ ಸಂಜೆ ಮಹಾರಾಜ್ಗಂಜ್ ಜಿಲ್ಲೆಯ ಪರ್ಸಾ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೀಗೆ 11 ಸಾವಿರ ವೋಲ್ಟ್ ವಿದ್ಯುತ್ ತಂತಿಗಳ ಮೇಲೆ ಮಲಗಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ವ್ಯಕ್ತಿಯನ್ನು ದೀನ್ ದಯಾಳ್ ಎಂದು ಗುರುತಿಸಲಾಗಿದೆ.
11 ಸಾವಿರ ವೋಲ್ಟ್ ವಿದ್ಯುತ್ ತಂತಿ ಮೇಲೆ ಮಲಗಿದ ವ್ಯಕ್ತಿ ವಿಡಿಯೋ :
वीडियो उत्तर प्रदेश के महराजगंज का बताया जा रहा है।
यहां पर एक शराबी 11KV पर बढ़िया झूलते हुए आराम फरमा रहा है।
पूछने पर बता रहा था कि लाइट ना आने की वजह से ऐसा कर रहा है।
बिजली विभाग वालों की इसने नीद हराम कर दी उनको AC से बाहर निकलना पड़ा। pic.twitter.com/x7ALFKoOM6
— Prof. इलाहाबादी ( نور ) (@ProfNoorul) June 24, 2026
Courtesy : Social Media / Twitter
ಸ್ಥಳೀಯರ ಮಾಹಿತಿ ಪ್ರಕಾರ, ಆತ ಅತಿಯಾಗಿ ಮದ್ಯ ಸೇವಿಸಿದ ಸ್ಥಿತಿಯಲ್ಲಿ ವಿದ್ಯುತ್ ಕಂಬ ಏರಿ ಮೇಲ್ಭಾಗದಲ್ಲಿದ್ದ ಹೈವೋಲ್ಟೇಜ್ ತಂತಿಗಳ ಮೇಲೆ ಅಡ್ಡಲಾಗಿ ಮಲಗಿದ್ದಾನೆ. ಈ ದೃಶ್ಯ ಕಂಡ ಗ್ರಾಮಸ್ಥರು ಯಾವುದೇ ಕ್ಷಣದಲ್ಲಿ ಆತ ವಿದ್ಯುತ್ ಸ್ಪರ್ಶದಿಂದ ಸುಟ್ಟು ಹೋಗಬಹುದು ಎಂಬ ಆತಂಕದಲ್ಲಿದ್ದರು.
ಈ ಸುದ್ದಿಯನ್ನು ಓದಿ : ನೀವು ಪದವೀಧರರೇ? ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.
ಬದುಕಿಸಿತು ಅದೃಷ್ಟ :
ಘಟನೆಯ ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ಆತ ಕಂಬ ಏರುವ ಕೆಲವೇ ನಿಮಿಷಗಳ ಮುಂಚೆ ಆ ಮಾರ್ಗದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದೇ ಕಾರಣಕ್ಕೆ ದೊಡ್ಡ ದುರಂತ ತಪ್ಪಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಒಂದು ವೇಳೆ ಆ ಸಮಯದಲ್ಲಿ ವಿದ್ಯುತ್ ಹರಿಯುತ್ತಿದ್ದರೆ ಆತ ಕ್ಷಣಾರ್ಧದಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ. ಘಟನೆ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ನೂರಾರು ಜನ ಸೇರಿ ಆತಂಕದಿಂದ ಮೇಲಕ್ಕೆ ನೋಡುತ್ತಿದ್ದರು.
ಪೊಲೀಸರ ತಕ್ಷಣ ಕಾರ್ಯಾಚರಣೆ :
ಘಟನೆಯ ಮಾಹಿತಿ ತಿಳಿಯುತ್ತಿದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ವ್ಯಕ್ತಿಗೆ ಕೆಳಗೆ ಇಳಿಯಲು ಸೂಚಿಸಿದ್ದಾರೆ. ಆದರೆ ಪೊಲೀಸರ ಮಾತಿಗೆ ಕ್ಯಾರೆ ಅನ್ನದ ಈತ ಕೆಳಗೆ ಇಳಿಯಲು ನಿರಾಕರಿಸಿದ್ದಾನೆ.
ಇದನ್ನು ಓದಿ : ಆರ್ಟಿಒ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಹೆದ್ದಾರಿಯಲ್ಲಿ ಇಟ್ಟಿಗೆ ಸುರಿದ ಡಂಪರ್ ಚಾಲಕ; ವಿಡಿಯೋ ವೈರಲ್.
ಆತ ನಿರಾಕರಿಸುತ್ತಿದ್ದಂತೆ ಭಿತೌಲಿ ಪೊಲೀಸರು ತಕ್ಷಣವೇ ವಿದ್ಯುತ್ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿ, ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಸಂಬಂಧಿಸಿದ ಲೈನ್ಗೆ ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜು ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಹಲವಾರು ಗಂಟೆಗಳ ಬಳಿಕ ರಕ್ಷಣೆ :
ಪೊಲೀಸರು, ವಿದ್ಯುತ್ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೇರಿ ಹಲವಾರು ಗಂಟೆಗಳ ಕಾಲ ದೀನ್ ದಯಾಳ್ ಅವರನ್ನು ಕೆಳಗೆ ಇಳಿಯುವಂತೆ ಮನವಿ ಮಾಡಿದ್ದಾರೆ. ಕೊನೆಗೂ ಎಲ್ಲರ ಪ್ರಯತ್ನ ಫಲ ನೀಡಿದ್ದು, ಆತ ಸುರಕ್ಷಿತವಾಗಿ ಕಂಬದಿಂದ ಕೆಳಗಿಳಿದಿದ್ದಾನೆ. ವ್ಯಕ್ತಿ ನೆಲಕ್ಕಿಳಿದ ತಕ್ಷಣ ಸ್ಥಳದಲ್ಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸದಸ್ಯರ ವಶಕ್ಕೆ :
ಭಿತೌಲಿ ಪೊಲೀಸ್ ಠಾಣೆಯ ಅಧಿಕಾರಿ ಸತ್ಯೇಂದ್ರ ಕುಮಾರ್ ರೈ ಮಾಹಿತಿ ನೀಡಿ, ವ್ಯಕ್ತಿ ಸಂಪೂರ್ಣವಾಗಿ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ. ತಕ್ಷಣ ವಿದ್ಯುತ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಬಳಿಕ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿ ಕುಟುಂಬ ಸದಸ್ಯರ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅದೃಷ್ಟವಶಾತ್ ಈ ಇಡೀ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಮದ್ಯದ ಅಮಲಿನಲ್ಲಿ ಮಾಡುವ ನಿರ್ಲಕ್ಷ್ಯ ಎಷ್ಟೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಉದಾಹರಣೆಯಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Disclaimer: ಈ 11 ಸಾವಿರ ವೋಲ್ಟ್ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಸುದ್ದಿಯಲ್ಲಿರುವ ಚಿತ್ರವನ್ನು ಮೂಲ ಫೋಟೋ ಆಧರಿಸಿ AI ಮೂಲಕ ಮರುಸೃಷ್ಟಿಸಲಾಗಿದೆ (AI Recreated Image).







